12th April 2025
ಚಡಚಣ: ಇಂದಿನ ಮಹಿಳೆಯರು ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಗುರಿ ಸಾಧಿಸಿದ್ದಾರೆ ಮತ್ತು ಸಾಧಿಸುತ್ತಿದ್ದಾರೆ ಎಂದರೆ ಅಜ್ಞಾನದ ಅಂಧಕಾರವನ್ನು ತೊಲಗಿಸಿ ಮಹಿಳೆ ಮತ್ತು ಹೆಚ್ಚಾಗಿ ದಲಿತರಿಗೆ ಜ್ಞಾನದ ಬೆಳಕನ್ನು ನೀಡಿದ ಮಹಾ ಪುರುಷ ಜ್ಯೋತಿಬಾ ಫುಲೆ ಮಹಿಳೆ ಅಡುಗೆ ಮನೆಗೆ ಮಾತ್ರ ಸಿಮಿತವಲ್ಲ ಎಂದು ದೇವರನಿಂಬರಗಿ ಗ್ರಾಮ ಪಂಚಾಯತ ಅಧ್ಯಕ್ಷ ಭೀಮನಗೌಡ ಬೀರಾದಾರ ಹೇಳಿದರು.
ದೇವರನಿಂಬರಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಜ್ಯೋತಿಬಾ ಫುಲೆ ವೃತ್ತದಲ್ಲಿ ಜಯಂತಿಯನ್ನು ಆಚರಿಸಿ ಫೊಟೊ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಾಜಿ ಗ್ರಾ.ಪಂ.ಅಧ್ಯಕ್ಷ ರಾಜು ಸಿಂಗೆ ಮಾತನಾಡಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟು ಇಂದು ಮಹಿಳೆಯರು ಎಲ್ಲಾ ರಂಗದಲ್ಲಿ ಮುಂದಡಿ ಇಡುತ್ತಿರುವದಕ್ಕೆ ಕಾರಣವೆ ನಮ್ಮ ಜ್ಯೋತಿಬಾ ಫುಲೆ ಅವರ ದೂರದೃಷ್ಟಿಯೆ ಕಾರಣ ಎಂದರು.
ಈ ಕಾರ್ಯಕ್ರಮದಲ್ಲಿ ಮಾಳಿ ಸಮಾಜದ ಅಧ್ಯಕ್ಷ ಚಂದ್ರಕಾAತ ಮಾಳಿ,ಗ್ರಾ.ಪಂ.ಸದಸ್ಯ ಬೀರಪ್ಪ ಸಲಗರ,ಎಲ್ಲ ಯುವಕರು ಇದ್ದರು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ